
ಬೆಂಗಳೂರು: ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ್ ಅವರು ಮಾತನಾಡುತ್ತಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಗಿಸಿಬಿಡಬೇಕು ಎಂದು ಹೇಳಿದ್ದರು. ನಂತರ ಇದು ನಾನು ಹಾಡು ಭಾಷೆಯಾಗಿ ಮಾತನಾಡಿದ್ದೇನೆ ವಿನಹ ಇದರಲ್ಲಿ ತಪ್ಪು ಕಲ್ಪನೆ ಬೇಡ ನನ್ನನ್ನು ಕ್ಷಮಿಸಿಬಿಡಬೇಕು ಎಂದು ಕ್ಷಮೆ ಕೂಡ ಕೇಳಿದ್ದರು.
ಆದರೆ ಇದಕ್ಕೆ ರಾಜ್ಯ ಹಾಗೂ ಜಿಲ್ಲಾಮಟ್ಟದ ಕಾಂಗ್ರೆಸ್ಸಿನ ಕಾರ್ಯಕರ್ತರು ಸಿದ್ದರಾಮಯ್ಯ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿ ಸಚಿವ ಅಶ್ವಥ್ ನಾರಾಯಣ್ ರಾಜೀನಾಮೆ ನೀಡಬೇಕು ಅವರ ವಿರುದ್ಧ ಮುಖದ್ದಮೆ ದಾಖಲಿಸಿ, ಜೈಲಿಗೆ ಕಳಿಸಬೇಕು ಎಂದು ಆಗ್ರಹಪಡಿಸಿದ್ದರು.
ಇದೇ ವಿಚಾರವಾಗಿ ಇಂದು ಸದನದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಯಾವುದೇ ಸೈದಾಂತಿಕ ಹಿನ್ನೆಲೆ ಇಲ್ಲ ಆದ್ದರಿಂದ ಅವರು ರೌಡಿಗಳ ತರ ಮಾತನಾಡುತ್ತಾರೆ ತಾಕತ್ತು ದಮ್ಮ ಇದ್ದರೆ ನನ್ನನ್ನು ಮುಗಿಸಿ ಬಿಡಲಿ ನೋಡೋಣ ಎಂದು ಚಾಲೆಂಜ್ ಹಾಕಿದರು. ನಂತರ ಈ ಹೆದರಿಕೆ ಬೆದರಿಕೆಗೆಲ್ಲ ನಾನು ಹೆದುರುವುದಿಲ್ಲ ನನ್ನ ನಿಲುವು ಏನಿದ್ದರೂ ಒಂದೇ ಎಂದು ಮಾತನಾಡಿದರು ಈ ಸಮಯದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಒಂದಷ್ಟು ವಾಕ್ ಸಮರ ನಡೆಯಿತು ಸಿದ್ದರಾಮಯ್ಯ ಮಾತನಾಡುತ್ತಾ ಪೊಲೀಸ್ ಇಲಾಖೆ ಸತ್ತುಹೋಗಿದೆ ಗೃಹ ಸಚಿವ ಅಸಮರ್ಥರು ಎಂದು ಹೇಳಿದರು ಆದರೆ ಇದಕ್ಕೆ ಕೌಂಟರ್ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಯಾರು ಸಮರ್ಥರು ಯಾರು ಅಸಮರ್ಥರು ಎನ್ನುವುದು ಚರ್ಚೆಗೆ ಬರಲಿ ನಾನು ಚರ್ಚೆಗೆ ಸಿದ್ಧವಾಗಿದ್ದೇನೆ ನನ್ನ ಕಾಲದಲ್ಲಿ ಏನಾಗಿದೆ ನಿಮ್ಮ ಕಾಲದಲ್ಲಿ ಏನು ಮಾಡಿದ್ದರು ಎನ್ನುವುದು ಸಾಬೀತಾಗಲಿ ನೋಡೋಣ ಎಂದು ಸವಾಲ್ ಹಾಕಿದರು…

ರಘುರಾಜ್ ಹೆಚ್.ಕೆ..9449553305…