Friday, June 20, 2025
Google search engine
Homeರಾಜ್ಯಶಿವಮೊಗ್ಗ ನಗರ ಆಮ್ ಆದ್ಮಿ ಪಾರ್ಟಿಯ ನಾಮಪತ್ರ ಪರಿಶೀಲಿಸಿ ತಿರಸ್ಕರಿಸಿ ಚುನಾವಣಾ ಅಧಿಕಾರಿಗಳಿಗೆ ಪಕ್ಷೇತರ ಅಭ್ಯರ್ಥಿ...

ಶಿವಮೊಗ್ಗ ನಗರ ಆಮ್ ಆದ್ಮಿ ಪಾರ್ಟಿಯ ನಾಮಪತ್ರ ಪರಿಶೀಲಿಸಿ ತಿರಸ್ಕರಿಸಿ ಚುನಾವಣಾ ಅಧಿಕಾರಿಗಳಿಗೆ ಪಕ್ಷೇತರ ಅಭ್ಯರ್ಥಿ ರಿಯಾಜ್ ಅಹ್ಮದ್ ಮನವಿ..!!

ಶಿವಮೊಗ್ಗ: ನಗರ ಕ್ಷೇತ್ರ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ನೇತ್ರಾವತಿ ಸುಳ್ಳು ಮಾಹಿತಿ ನೀಡಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಪಕ್ಷೇತರ ಅಭ್ಯರ್ಥಿ ರಿಯಾಜ್ ಅಹ್ಮದ್ ಎನ್ನುವವರು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದು ಆ ದೂರಿನಲ್ಲಿ ನಾಮಪತ್ರವನ್ನು ಸರಿಯಾಗಿ ಪರಿಶೀಲಿಸಿ ತಿರಸ್ಕರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಅವರು ನೀಡಿದ ದೂರಿನ ಸಾರಾಂಶ ಈ ಕೆಳಗಿನಂತಿದೆ :

ವಿಷಯ: ವಿಧಾನಸಭಾ ಕ್ಷೇತ್ರ ಶಿವಮೊಗ್ಗ ನಗರ ಆಮ್ ಆದ್ಮಿ ಪಾರ್ಟಿ (AAP) ಪಕ್ಷದ ಅಭ್ಯರ್ಥಿ ಸುಳ್ಳು ಮಾಹಿತಿ ನೀಡಿ ನಾಮ ಪತ್ರ ಸಲ್ಲಿಸಿದ್ದು ತಕ್ಷಣ ಸೂಕ್ಷ್ಮವಾಗಿ ಪರಿಶೀಲಿಸಿ ತಿರಸ್ಕರಿಸುವ ಬಗ್ಗೆ,

ಮಾನ್ಯರೆ, ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಾರ್ಟಿ (AAP) ಪಕ್ಷದ ಅಭ್ಯರ್ಥಿ ನೇತ್ರಾವತಿ ಟಿ ನಾಮ ಪತ್ರ ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಕಂಡ ಬಂದಂತಹ ಅಗಾಧ ವಿಚಾರಗಳು ಅಭ್ಯರ್ಥಿಯ ಗಂಡ ಬದುಕಿದ್ದರೂ ಸಹ ಮರಣ ಹೊಂದಿದ್ದಾರೆ ಎಂದು ಸುಳ್ಳು ಸೂಚಿಸಿರುತ್ತಾರೆ ಮತ್ತು ಸೂರ್ಯ ನರ್ಸಿಂಗ್ ಕಾಲೇಜ್ ವ್ಯವಸ್ಥಾಪಕರು ನಿರ್ದೇಶಕರು ಆಗಿದ್ದು ಇದನ್ನು ಸಹ ನಾಮ ಪತ್ರದಲ್ಲಿ ಘೋಷಣೆ ಮಾಡಿಕೊಂಡಿರುವುದಿಲ್ಲ ಹಾಗೂ ಸರ್ಕಾರದ ಬಡವರ ಹಂಚಿಕೆ ಆಗುವಂತಹ ವಸತಿ ಆಶ್ರಯ ಯೋಜನೆಯ ನಿವೇಶನವನ್ನು ಸಹ ಇವರು ಪಡೆದುಕೊಂಡಿದ್ದು ಇವರ ಹೆಸರಿಗೆ ಮಾಡಿಕೊಂಡಿರುತ್ತಾರೆ ಮಹಾನಗರ ಪಾಲಿಕೆಯಲ್ಲಿ ದಾಖಲೆ ಲಭ್ಯವಿರುತ್ತದೆ ಇದನ್ನು ಸಹ ನಾಮ ಪತ್ರದಲ್ಲಿ ಘೋಷಣೆ ಮಾಡಿಕೊಂಡಿರುವುದಿಲ್ಲ ಅದರಿಂದ ತಾವುಗಳು ತಕ್ಷಣ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯ ನಾಮ ಪತ್ರ ಸೂಕ್ಷ್ಮವಾಗಿ ಸೂಕ್ತವಾಗಿ ಪರಿಶೀಲಿಸಿ ತಿರಸ್ಕರಿಸಬೇಕೆಂದು ಕೇಳಿಕೊಳ್ಳುತ್ತೇನೆ,
ಧನ್ಯವಾದಗಳು..

ಗೆ: ಚುನಾವಣಾ ಅಧಿಕಾರಿಗಳು,
ಮಹಾನಗರ ಪಾಲಿಕೆ ಶಿವಮೊಗ್ಗ,
ಗೆ: ರಾಜ್ಯ ಚುನಾವಣಾ ಆಯೋಗ ಬೆಂಗಳೂರು,
ಗೆ: ಚುನಾವಣಾ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ,

ಇಂದ: ರಿಯಾಜ್ ಅಹಮದ್
(ವಿಧಾನಸಭಾ ಕ್ಷೇತ್ರ ಶಿವಮೊಗ್ಗ ನಗರ ಪಕ್ಷೇತರ ಅಭ್ಯರ್ಥಿ) ಎಸ್ ಆರ್ ಇಂಜಿನಿಯರಿಂಗ್ ವರ್ಕ್ 100ಅಡಿ ರಸ್ತೆ
ಇಲ್ಯಾಜ್ ನಗರ ನ್ಯೂ ಮಂಡ್ಲಿ ಶಿವಮೊಗ್ಗ.577202
ಮೊಬೈಲ್ 9448988048….

ರಘುರಾಜ್ ಹೆಚ್.ಕೆ..9449553305…

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!