
ಸಾಗರ: ಸಿಗಂದೂರು ಬಳಿ ಪ್ರವಾಸಿಗರ ಬಸ್ ಪಲ್ಟಿ ಯಾಗಿದ್ದು – ಓರ್ವ ಪ್ರವಾಸಿಗ ಸಾವನ್ನು ಅಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ…
ಕೊಲ್ಲೂರಿಂದ ಸಿಗಂದೂರಿಗೆ ಬರುತ್ತಿದ್ದ ಬೆಂಗಳೂರಿನ ಟೆಂಪೋಟ್ರಾವೆಲ್ ಒಂದು ಸಾಗರ ತಾಲೂಕಿನ ಸಿಂಗದೂರು ಬಳಿ ಉರುಳಿ ಬಿದ್ದಿದ್ದು 60 ವರ್ಷದ ವೃದ್ದೆ ಒಬ್ವರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಏನಿದು ಘಟನೆ:
ಬೆಂಗಳೂರಿನ ದೇವನಹಳ್ಳಿಯ ನಿವಾಸಿಗಳಾದ 20 ಜನರು ಶನಿವಾರ ಕೊಲ್ಲೂರಿಗೆ ತೆರಳಿದ್ದು ಕೊಲ್ಲೂರು ದೇವಿಯ ದರ್ಶನ ಮುಗಿಸಿ ಸಿಗಂದೂರಿಗೆ ಇಂದು ಬೆಳಿಗ್ಗೆ ಬರುವಾಗ ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೊಪ್ಪದಲ್ಲಿ ಚಾಲಕನ ನಿರ್ಲಕ್ಷತದಿಂದಾಗಿ ವಾಹನ ಉರುಳಿ ಬಿದ್ದಿದ್ದು.
ಒಟ್ಟು ಟಿಟಿಯಲ್ಲಿ 20 ಜನ ಪ್ರಯಾಣಿಕರಿದ್ದು ಇದರಲ್ಲಿ ಮುನಿರತ್ನಮ್ಮ ಎಂಬ 60 ವರ್ಷದ ವೃದ್ದೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಚಾಲಕ ಮತ್ತು 18 ಜನ ಪ್ರಯಾಣಿಕರನ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿದ್ದು.
ರಸ್ತೆ ತಿರುವಿನಲ್ಲಿದ್ದು ಚಾಲಕ ಅತಿವೇಗದಿಂದಾಗಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಓಂಕಾರ ಎಸ್. ವಿ. ತಾಳಗುಪ್ಪ…