
ತೀರ್ಥಹಳ್ಳಿ : ಆಗುಂಬೆ ಚೆಕ್ ಪೋಸ್ಟ್ ನಲ್ಲಿ ಡಿ ವೈ ಎಸ್ ಪಿ ಗಜಾನನ ಸುತಾರ, ಇನ್ಸ್ಪೆಕ್ಟರ್ ಪ್ರವೀಣ್ ನೀಲಮ್ಮನವರ್, ಎಂ ಸಿ ಸಿ ನೋಡಲ್ ಶ್ರೀಮತಿ ಶೈಲಾ ಎನ್ , ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ರವಿಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 59 ಲಕ್ಷ ಬೆಳೆಬಾಳುವ ಸೀರೆಗಳನ್ನು ವಶಪಡಿಸಿಕೊಂಡಿದ್ದು.
ಇಂದು ಸಂಜೆ ಆಗುಂಬೆ ತಪಾಸಣೆ ಕೇಂದ್ರದಲಿ ತಪಾಸಣೆ ಮಾಡುವ ಸಮಯದಲ್ಲಿ, ತಮಿಳುನಾಡು ಮೂಲದ ಇಚರ್ ಗಾಡಿಯನ್ನು ಪರಿಶೀಲಿಸಿದಾಗ, ಒಟ್ಟು 34 ಬಾಕ್ಸ್ ನಲ್ಲಿ 1750 ಕ್ಕಿಂತ ಹೆಚ್ಚು ಸೀರೆಗಳಿದ್ದು, 59 ಲಕ್ಷ ಬೆಲೆ ಬಾಳುವ ದಾಸ್ತಾನು ಮತ್ತು ಲಾರಿಯನ್ನು ಸೂಕ್ತ ಕ್ರಮಕ್ಕಾಗಿ, ಆಗುಂಬೆ ಪೋಲಿಸ್ SST ತಂಡದ ಮೂಲಕ ವಶ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಪರಿಶೀಲನೆಗಾಗಿ ವರದಿ ಮಾಡಲಾಗಿದೆ..
ಕಾರ್ಯಾಚರಣೆಯಲ್ಲಿ ಇದ್ದ ಪಿ ಎಸ್ ಐ ಶಿವಕುಮಾರ್, ಎಸ್ ಎಸ್ ಟಿ ತಂಡದ ಮುಖ್ಯಸ್ಥ ಮಂಜು ಬಾಬು, ಸಹಾಯಕರಾದ ಅನಿಲ್ ರಾಜ್, ಪೋಲಿಸ್ ಬಾರ್ಕಿ ಹನುಮಂತಪ್ಪ, ಎ ಎಸ್ ಐ ನಾಗೇಶ್, ಪೋಲಿಸ್ ಸಿಬ್ಬಂದಿಗಳಾದ ಅನಿಲ್, ಆದರ್ಶ, ಉಲ್ಲಾಸ್, ಗಣೇಶ್, ಶ್ರೀಮತಿ ಚೇತನಾ, ಶ್ರೀಮತಿ ನಿಶಾ ಅವರ ಕಾರ್ಯಕ್ಕೆ ..
ಪೋಲಿಸ್ ಉಪಾಧೀಕ್ಷಕರಾದ ಗಜಾನನ ಸುತಾರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ….
ರಘುರಾಜ್ ಹೆಚ್.ಕೆ..9449553305…