Friday, June 20, 2025
Google search engine
Homeರಾಜ್ಯBig news : ಆಗುಂಬೆ ಚೆಕ್ ಪೋಸ್ಟ್ ನಲ್ಲಿ ಎಸ್ ಎಸ್ ಟಿ ಮುಖ್ಯಸ್ಥ ಮಂಜು...

Big news : ಆಗುಂಬೆ ಚೆಕ್ ಪೋಸ್ಟ್ ನಲ್ಲಿ ಎಸ್ ಎಸ್ ಟಿ ಮುಖ್ಯಸ್ಥ ಮಂಜು ಬಾಬು ಮತ್ತು ತಂಡದ ಮಿಂಚಿನ‌ ಕಾರ್ಯಾಚರಣೆ, ಸೂಕ್ತ ದಾಖಲೆ ಇಲ್ಲದ 59 ಲಕ್ಷ ಮೌಲ್ಯದ ಸೀರೆ ದಾಸ್ತಾನು ವಶ ..‌!!

ತೀರ್ಥಹಳ್ಳಿ : ಆಗುಂಬೆ ಚೆಕ್ ಪೋಸ್ಟ್ ನಲ್ಲಿ ಡಿ ವೈ ಎಸ್ ಪಿ ಗಜಾನನ ಸುತಾರ, ಇನ್ಸ್ಪೆಕ್ಟರ್ ಪ್ರವೀಣ್ ನೀಲಮ್ಮನವರ್, ಎಂ ಸಿ ಸಿ‌ ನೋಡಲ್ ಶ್ರೀಮತಿ ಶೈಲಾ ಎನ್ , ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ರವಿಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 59 ಲಕ್ಷ ಬೆಳೆಬಾಳುವ ಸೀರೆಗಳನ್ನು ವಶಪಡಿಸಿಕೊಂಡಿದ್ದು.

ಇಂದು ಸಂಜೆ ಆಗುಂಬೆ ತಪಾಸಣೆ ಕೇಂದ್ರದಲಿ ತಪಾಸಣೆ ಮಾಡುವ ಸಮಯದಲ್ಲಿ, ತಮಿಳುನಾಡು ಮೂಲದ ಇಚರ್ ಗಾಡಿಯನ್ನು ಪರಿಶೀಲಿಸಿದಾಗ, ಒಟ್ಟು 34 ಬಾಕ್ಸ್ ನಲ್ಲಿ 1750 ಕ್ಕಿಂತ ಹೆಚ್ಚು ಸೀರೆಗಳಿದ್ದು, 59 ಲಕ್ಷ ಬೆಲೆ ಬಾಳುವ ದಾಸ್ತಾನು ಮತ್ತು ಲಾರಿಯನ್ನು ಸೂಕ್ತ ಕ್ರಮಕ್ಕಾಗಿ, ಆಗುಂಬೆ ಪೋಲಿಸ್ SST ತಂಡದ ಮೂಲಕ‌ ವಶ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಪರಿಶೀಲನೆಗಾಗಿ ವರದಿ ಮಾಡಲಾಗಿದೆ..

ಕಾರ್ಯಾಚರಣೆಯಲ್ಲಿ ಇದ್ದ ಪಿ ಎಸ್ ಐ ಶಿವಕುಮಾರ್, ಎಸ್‌ ಎಸ್ ಟಿ ತಂಡದ ಮುಖ್ಯಸ್ಥ ಮಂಜು ಬಾಬು, ಸಹಾಯಕರಾದ ಅನಿಲ್ ರಾಜ್, ಪೋಲಿಸ್ ಬಾರ್ಕಿ ಹನುಮಂತಪ್ಪ, ಎ ಎಸ್‌ ಐ ನಾಗೇಶ್, ಪೋಲಿಸ್ ಸಿಬ್ಬಂದಿಗಳಾದ ಅನಿಲ್, ಆದರ್ಶ, ಉಲ್ಲಾಸ್, ಗಣೇಶ್, ಶ್ರೀಮತಿ ಚೇತನಾ, ಶ್ರೀಮತಿ ನಿಶಾ ಅವರ ಕಾರ್ಯಕ್ಕೆ ..‌
ಪೋಲಿಸ್ ಉಪಾಧೀಕ್ಷಕರಾದ ಗಜಾನನ ಸುತಾರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ….

ರಘುರಾಜ್ ಹೆಚ್.ಕೆ..9449553305…

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!