Sunday, May 4, 2025
Google search engine
Homeಶಿವಮೊಗ್ಗತೀರ್ಥಹಳ್ಳಿ : ಕಟ್ಟೆಗದ್ದೆ ಹಾಲಪ್ಪನವರ ದ್ವಿತೀಯ ಪುತ್ರ ಆಕರ್ಷರಾಜ್ ಕೆ, ಹೆಚ್ ಆತ್ಮಹತ್ಯೆ..!!

ತೀರ್ಥಹಳ್ಳಿ : ಕಟ್ಟೆಗದ್ದೆ ಹಾಲಪ್ಪನವರ ದ್ವಿತೀಯ ಪುತ್ರ ಆಕರ್ಷರಾಜ್ ಕೆ, ಹೆಚ್ ಆತ್ಮಹತ್ಯೆ..!!

ತೀರ್ಥಹಳ್ಳಿ : ತಾಲೂಕಿನ ನೇರಲಮನೆ ಗ್ರಾಮ ಸಾಲೂರು ಕಟ್ಟೆ ಗದ್ದೆ ನಿವಾಸಿಯಾದ ಕಟ್ಟೆಗದ್ದೆ ಹಾಲಪ್ಪನವರ ದ್ವಿತೀಯ ಪುತ್ರ ಆಕರ್ಷರಾಜ್ ಕೆ, ಹೆಚ್ (24ವರ್ಷ ) ಆತ್ಮಹತ್ಯೆ ಮಾಡಿಕೊಂಡಿದ್ದು.

ಕಾಂಗ್ರೆಸ್ ಪಕ್ಷದ ಧುರೀಣರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಭೂಮಿ ಬ್ಯಾಂಕ್ (ಪಿಎಲ್ ಡಿ ಬ್ಯಾಂಕ್ )ಅಧ್ಯಕ್ಷರಾಗಿದ್ದ ಕಟ್ಟೆಗದ್ದೆ ಹಾಲಪ್ಪನವರ ಮಗ ಆಕರ್ಷ ರಾಜ್ ಮೊನ್ನೆ ದಿನ ರಾತ್ರಿ ತೀರ್ಥಹಳ್ಳಿಗೆ ಬರುವಾಗ ಸಾಲೂರು– ಕೊಂಡ್ಲೂರು ಸಮೀಪದ ಕವಲೇದುರ್ಗ ರಸ್ತೆಯಲ್ಲಿ (ದುರ್ಗಾ ಕ್ರಾಸ್ ) ನ ಹತ್ತಿರ ಶಿಫ್ಟ್ ಕಾರು ವಿದ್ಯುತ್ ಕಂಬಕ್ಕೆ ಅಪಘಾತ ಮಾಡಿ, ಕಾರು ಚಲಿಸುವ ಸ್ಥಿತಿಯಲ್ಲಿ ಇಲ್ಲದೆ ಅಲ್ಲೇ ಬಿಟ್ಟು ಹೋಗಿದ್ದು, ಅಂದು ರಾತ್ರಿಯಿಂದ ನಾಪತ್ತೆಯಾಗಿದ್ದಾರೆ ತಿಳಿದು ಬಂದಿತ್ತು .

ನಿನ್ನೆ ದಿನ ಎಲ್ಲ ಕಡೆ ಕುಟುಂಬದವರು ಅವರನ್ನು ಹುಡುಕಿದ್ದು ಪತ್ತೆಯಾಗದೆ ಇಂದು ಬೆಳಿಗ್ಗೆ ಕವಲೇದುರ್ಗ ಕೆರೆಯಲ್ಲಿ ಶವ ಪತ್ತೆಯಾಗಿದೆ .

ಮೃತ ಯವಕ ಬಿಇ ಸಿವಿಲ್, ಎಂ ಟೆಕ್ ಪದವೀಧರರಾಗಿದ್ದು ಅವಿವಾಹಿತರಾಗಿದ್ದರು . ಕವಲೆ ದುರ್ಗದ ಕೋಟೆಯಲ್ಲಿ ಕಟ್ಟಡದ ಕೆಲಸ ಮಾಡಿಸುತ್ತಿದ್ದರು…

ಕಟ್ಟೆ ಗದ್ದೆ ಹಾಲಪ್ಪನವರ ಪ್ರಥಮ ಪುತ್ರ ಆಶಿಕ್ ರಾಜ್ ಕೆ.ಹೆಚ್ ವಿವಾಹ ಇತ್ತೀಚಿಗಷ್ಟೇ ನಡೆದಿತ್ತು. ಈಗ ದ್ವಿತೀಯ ಪುತ್ರನ ಮರಣದ ಸುದ್ದಿ ತೀವ್ರ ಆಘಾತ ತಂದೊಡ್ಡಿದೆ.

ಮೃದು ಸ್ವಭಾವದ, ಸರಳತೆಯ, ಎಲ್ಲರಲ್ಲೂ ಬೆರೆಯುತ್ತಿದ್ದ ಯುವಕ ಆಕರ್ಷ ರಾಜ್ ಆಕಾಲಿಕ ದುರ್ಮರಣ ಸ್ನೇಹಿತರಿಗೆ ಕುಟುಂಬದವರಿಗೆ ತೀವ್ರ ಆಘಾತ ಉಂಟು ಮಾಡಿದೆ.

ಇವರ ಸಾವಿನ ನೋವನ್ನು ಬರಿಸುವ ಶಕ್ತಿಯನ್ನು ಭಗವಂತ ಆ ಕುಟುಂಬಕ್ಕೆ ನೀಡಲಿ …

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..!