Home ಶಿವಮೊಗ್ಗಶಿವಮೊಗ್ಗ ಜಿಲ್ಲಾಡಳಿತ ವೈಫಲ್ಯ -ನೆರೆ ಪೀಡಿತ ಪ್ರದೇಶ ಸಂತ್ರಸ್ತರಿಗೆ ಬಿಟ್ಟ ದೋಣಿಗಳಿಗೆ ಅನುಭವಿ ಚಾಲಕರೇ ಇಲ್ಲ – ಅಪ್ರಾಪ್ತ ಬಾಲಕರಿಂದ ದೋಣಿ ಚಾಲನೆ – LIFE JOCKET ಕಣ್ಮರೆ – ಅನಾಹುತ ಸಂಭವಿಸಿದರೆ ಯಾರು ಹೊಣೆ…..? ಜಿಲ್ಲಾಧಿಕಾರಿಗಳೆ ಸೂಕ್ತ ರಕ್ಷಣೆ ಒದಗಿಸಿ ಗ್ರಾಮಸ್ಥರ ಅಳಲು..!!

ಶಿವಮೊಗ್ಗ ಜಿಲ್ಲಾಡಳಿತ ವೈಫಲ್ಯ -ನೆರೆ ಪೀಡಿತ ಪ್ರದೇಶ ಸಂತ್ರಸ್ತರಿಗೆ ಬಿಟ್ಟ ದೋಣಿಗಳಿಗೆ ಅನುಭವಿ ಚಾಲಕರೇ ಇಲ್ಲ – ಅಪ್ರಾಪ್ತ ಬಾಲಕರಿಂದ ದೋಣಿ ಚಾಲನೆ – LIFE JOCKET ಕಣ್ಮರೆ – ಅನಾಹುತ ಸಂಭವಿಸಿದರೆ ಯಾರು ಹೊಣೆ…..? ಜಿಲ್ಲಾಧಿಕಾರಿಗಳೆ ಸೂಕ್ತ ರಕ್ಷಣೆ ಒದಗಿಸಿ ಗ್ರಾಮಸ್ಥರ ಅಳಲು..!!

by EDITOR NEWS WARRIORS
0 comments

ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯ ಸೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಸನಗದ್ದೆ ಗ್ರಾಮ ಅತೀ ಹೆಚ್ಚಿನ ಮಳೆಯಿಂದಾಗಿ ಸುಮಾರು 25 ಕ್ಕೂ ಮಿಕ್ಕಿದ ಕುಟುಂಬಗಳೂ ನಡುಗಡ್ಡೆಯಲ್ಲಿದ್ದು, ಸಾಗರ ತಾಲ್ಲೂಕು ಆಡಳಿತ ಬೀಸನಗದ್ದೆಯ ಗ್ರಾಮಸ್ಥರಿಗೆ ಓಡಾಡಲು ದೋಣಿ ವ್ಯವಸ್ಥೆ ಮಾಡಿದ್ದೂ ಸರಿಯಷ್ಟೇ ದೋಣಿ ಚಲಾಯಿಸಲು ಯಾವೊಬ್ಬ ಅನುಭವಿ ಚಾಲಕನನ್ನು ನೇಮಿಸದೇ ಬೀಸನಗದ್ದೆ ಗ್ರಾಮಸ್ಥರೇ ಅನಿವಾರ್ಯವಾಗಿ ದೋಣಿ ಚಲಾವಣೆ ಮಾಡುತ್ತಿದ್ದೂ, ಸಾಗರ ತಾಲ್ಲೂಕು ಆಡಳಿತ LIFE JOCKET ಕೂಡ ನೀಡದೇ ಇರುವುದು ಶಿವಮೊಗ್ಗ ಜಿಲ್ಲಾ ಆಡಳಿತ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.

ಅಪ್ರಾಪ್ತ ಬಾಲಕರೇ LIFE JOCKET ಬಳಸದೇ ದೋಣಿಯಲ್ಲಿ ಓಡಾಡುತ್ತಿದ್ದೂ, ಮುಂದೇನಾದರೂ ಅವಘಡ ಸಂಭವಿಸಿ ಪ್ರಾಣಹಾನಿಯಾದರೇ ಯಾರು ಜವಾಬ್ದಾರರು

ಶಿವಮೊಗ್ಗ ಜಿಲ್ಲಾ ಸಂಸದರಾದ ಬಿ. ವೈ. ರಾಘವೇಂದ್ರ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರ್ ಬಂಗಾರಪ್ಪ ಇಂತಹ ತುರ್ತು ಸಂದರ್ಭದಲ್ಲಿ ಬೇಜವಾಬ್ದಾರಿತನ ಸಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕ ನೀರಾವರಿ ನಿಗಮದಿಂದ ಕಳೆದ 06 ತಿಂಗಳಲ್ಲಿ 01 ಕೋಟಿ ರಸ್ತೆ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಉದ್ಘಾಟನೆಗೂ ಮುನ್ನವೇ 01 ಕೋಟಿ ರಸ್ತೆ ನೀರಲ್ಲಿ ಕೊಚ್ಚಿ ಹೋಗಿರುವುದು ಕರ್ನಾಟಕ ನೀರಾವರಿ ನಿಗಮದ 40% ಕಮಿಷನ್ ಗೆ ತುತ್ತಾಗಿರುವುದು. ಕಣ್ಮುಚ್ಚಿ ಕುಳಿತ ಜವಾಬ್ದಾರಿ ಸ್ಥಾನದಲ್ಲಿರುವ ಶಿವಮೊಗ್ಗ ಜಿಲ್ಲಾ ಸಂಸದರು ಹಾಗೂ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರು ಮೌನಕ್ಕೆ ಶರಣಾಗಿರುವ ಹಿಂದಿನ ಮರ್ಮವೇನು……..?!

ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಇತ್ತ ಗಮನ ಹರಿಸಿ ನ್ಯಾಯ ಹಾಗೂ ಸೂಕ್ತ ರಕ್ಷಣೆ ನೀಡುವಂತೆ ಬೀಸನಗದ್ದೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಓಂಕಾರ ಎಸ್. ವಿ. ತಾಳಗುಪ್ಪ….

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...