Tuesday, May 6, 2025
Google search engine
Homeಶಿವಮೊಗ್ಗಶಿವಮೊಗ್ಗ ಜಿಲ್ಲಾಡಳಿತ ವೈಫಲ್ಯ -ನೆರೆ ಪೀಡಿತ ಪ್ರದೇಶ ಸಂತ್ರಸ್ತರಿಗೆ ಬಿಟ್ಟ ದೋಣಿಗಳಿಗೆ ಅನುಭವಿ ಚಾಲಕರೇ ಇಲ್ಲ...

ಶಿವಮೊಗ್ಗ ಜಿಲ್ಲಾಡಳಿತ ವೈಫಲ್ಯ -ನೆರೆ ಪೀಡಿತ ಪ್ರದೇಶ ಸಂತ್ರಸ್ತರಿಗೆ ಬಿಟ್ಟ ದೋಣಿಗಳಿಗೆ ಅನುಭವಿ ಚಾಲಕರೇ ಇಲ್ಲ – ಅಪ್ರಾಪ್ತ ಬಾಲಕರಿಂದ ದೋಣಿ ಚಾಲನೆ – LIFE JOCKET ಕಣ್ಮರೆ – ಅನಾಹುತ ಸಂಭವಿಸಿದರೆ ಯಾರು ಹೊಣೆ…..? ಜಿಲ್ಲಾಧಿಕಾರಿಗಳೆ ಸೂಕ್ತ ರಕ್ಷಣೆ ಒದಗಿಸಿ ಗ್ರಾಮಸ್ಥರ ಅಳಲು..!!

ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯ ಸೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಸನಗದ್ದೆ ಗ್ರಾಮ ಅತೀ ಹೆಚ್ಚಿನ ಮಳೆಯಿಂದಾಗಿ ಸುಮಾರು 25 ಕ್ಕೂ ಮಿಕ್ಕಿದ ಕುಟುಂಬಗಳೂ ನಡುಗಡ್ಡೆಯಲ್ಲಿದ್ದು, ಸಾಗರ ತಾಲ್ಲೂಕು ಆಡಳಿತ ಬೀಸನಗದ್ದೆಯ ಗ್ರಾಮಸ್ಥರಿಗೆ ಓಡಾಡಲು ದೋಣಿ ವ್ಯವಸ್ಥೆ ಮಾಡಿದ್ದೂ ಸರಿಯಷ್ಟೇ ದೋಣಿ ಚಲಾಯಿಸಲು ಯಾವೊಬ್ಬ ಅನುಭವಿ ಚಾಲಕನನ್ನು ನೇಮಿಸದೇ ಬೀಸನಗದ್ದೆ ಗ್ರಾಮಸ್ಥರೇ ಅನಿವಾರ್ಯವಾಗಿ ದೋಣಿ ಚಲಾವಣೆ ಮಾಡುತ್ತಿದ್ದೂ, ಸಾಗರ ತಾಲ್ಲೂಕು ಆಡಳಿತ LIFE JOCKET ಕೂಡ ನೀಡದೇ ಇರುವುದು ಶಿವಮೊಗ್ಗ ಜಿಲ್ಲಾ ಆಡಳಿತ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.

ಅಪ್ರಾಪ್ತ ಬಾಲಕರೇ LIFE JOCKET ಬಳಸದೇ ದೋಣಿಯಲ್ಲಿ ಓಡಾಡುತ್ತಿದ್ದೂ, ಮುಂದೇನಾದರೂ ಅವಘಡ ಸಂಭವಿಸಿ ಪ್ರಾಣಹಾನಿಯಾದರೇ ಯಾರು ಜವಾಬ್ದಾರರು

ಶಿವಮೊಗ್ಗ ಜಿಲ್ಲಾ ಸಂಸದರಾದ ಬಿ. ವೈ. ರಾಘವೇಂದ್ರ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರ್ ಬಂಗಾರಪ್ಪ ಇಂತಹ ತುರ್ತು ಸಂದರ್ಭದಲ್ಲಿ ಬೇಜವಾಬ್ದಾರಿತನ ಸಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕ ನೀರಾವರಿ ನಿಗಮದಿಂದ ಕಳೆದ 06 ತಿಂಗಳಲ್ಲಿ 01 ಕೋಟಿ ರಸ್ತೆ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಉದ್ಘಾಟನೆಗೂ ಮುನ್ನವೇ 01 ಕೋಟಿ ರಸ್ತೆ ನೀರಲ್ಲಿ ಕೊಚ್ಚಿ ಹೋಗಿರುವುದು ಕರ್ನಾಟಕ ನೀರಾವರಿ ನಿಗಮದ 40% ಕಮಿಷನ್ ಗೆ ತುತ್ತಾಗಿರುವುದು. ಕಣ್ಮುಚ್ಚಿ ಕುಳಿತ ಜವಾಬ್ದಾರಿ ಸ್ಥಾನದಲ್ಲಿರುವ ಶಿವಮೊಗ್ಗ ಜಿಲ್ಲಾ ಸಂಸದರು ಹಾಗೂ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರು ಮೌನಕ್ಕೆ ಶರಣಾಗಿರುವ ಹಿಂದಿನ ಮರ್ಮವೇನು……..?!

ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಇತ್ತ ಗಮನ ಹರಿಸಿ ನ್ಯಾಯ ಹಾಗೂ ಸೂಕ್ತ ರಕ್ಷಣೆ ನೀಡುವಂತೆ ಬೀಸನಗದ್ದೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಓಂಕಾರ ಎಸ್. ವಿ. ತಾಳಗುಪ್ಪ….

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..!