ಶಿವಮೊಗ್ಗ : ನಗರದಲ್ಲಿ ಇಂದು ಬೆಳಗ್ಗೆ ಟಿ.ಡಿ ಸಾಗರಕರ್, ಪಿ.ಎಸ್.ಐ ವಿನೋಬನಗರ ಪೊಲೀಸ್ ಠಾಣೆ ರವರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಬಸವನಗಂಗೂರು ತುಂಗಾ ಚಾನಲ್ ಬಳಿ ಅಪರಿಚಿತ ವ್ಯಕ್ತಿಗಳು ಅಪಾಯಕರ ಆಯುಧಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಹೋಗಿ ಬರುವ ಜನರನ್ನು ಹೆದರಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ, ಕೂಡಲೇ ಸ್ಥಳಕ್ಕೆ ಹೋಗಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ
1) ಅನಿಲ್ ಕುಮಾರ್, 42 ವರ್ಷ, ಬೊಮ್ಮನಕಟ್ಟೆ, ಶಿವಮೊಗ್ಗ, 2) ಶಿವಾನಾಯ್ಕ್, 34 ವರ್ಷ ಕೋಹಳ್ಳಿ ತಾಂಡ ಶಿವಮೊಗ್ಗ, 3) ಶಿವಕುಮಾರ.ಟಿ, 45 ವರ್ಷ, ಆಯನೂರು, ಶಿವಮೊಗ್ಗ ಮತ್ತು 4) ಖಲೀಮ್, 30 ವರ್ಷ, ಸಿರಿಗೆರೆ ಗ್ರಾಮ ಶಿವಮೊಗ್ಗ ರವರುಗಳನ್ನು ವಶಕ್ಕೆ ಪಡೆದು, ಸದರಿಯವರ ವಶದಿಂದ ಅಪಾಯಕರ ಆಯುಧಗಳನ್ನು ಅಮಾನತ್ತು ಪಡಿಸಿಕೊಂಡು, ಅವರ ವಿರುದ್ಧ ಗುನ್ನೆ ಸಂಖ್ಯೆ 0032/2023 ಕಲಂ 399, 402 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ…

ರಘುರಾಜ್ ಹೆಚ್.ಕೆ…9449553305…