
ಸಿದ್ದಾಪುರ (ಉ. ಕ.) :- ಕಾರವಾರ ಜಿಲ್ಲೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಸಿದ್ದಾಪುರ (siddapura) ತಾಲ್ಲೂಕಿನ 16 ನೇ ಮೈಲಿಕಲ್ ಬಳಿ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ (shivamogga) ಸಾಗರಕ್ಕೆ (sagara) ಬರುತ್ತಿದ್ದ ಬಸ್ ಇದಾಗಿತ್ತು. ಹಳಿಯಾಳದಿಂದ ಹೊರಟಿದ್ದ ಬಸ್ ಸಿದ್ದಾಪುರದ 16 ನೇ ಮೈಲಿಕಲ್ ಬಳಿ ಬರುವ ಟರ್ನಿಂಗ್ನಲ್ಲಿ ಅಪಘಾತಕ್ಕೀಡಾಗಿದೆ.
ತಿರುವಿನಲ್ಲಿ ಬಸ್ನ ಸ್ಟೇರಿಂಗ್ ಕಟ್ ಆಗಿದೆ, ಪರಿಣಾಮ ಬಸ್ ಚಾಲಕ ನಿಯಂತ್ರಣ ತಪ್ಪಿದೆಯಷ್ಟೆ ಅಲ್ಲದೆ ರಸ್ತೆ ಪಕ್ಕದಲ್ಲಿರುವ ಹೊಂಡಕ್ಕೆ ಉರುಳಿದೆ. ಅದೃಷ್ಟಕ್ಕೆ ಉರುಳಿದ ಬಸ್ ಮರವೊಂದಕ್ಕೆ ಆನಿಕೊಂಡು ನಿಂತಿದ್ದರಿಂದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ. ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ…