Tuesday, May 6, 2025
Google search engine
Homeರಾಜ್ಯತೀರ್ಥಹಳ್ಳಿ : ಬಿಜೆಪಿ ಮುಖಂಡನಿಂದ ಎಸ್ ಟಿ ಯುವತಿಯ ಮೇಲೆ "ಅತ್ಯಾಚಾರ"..!!!! 8 (ಎಂಟು)ತಿಂಗಳ ನಂತರ...

ತೀರ್ಥಹಳ್ಳಿ : ಬಿಜೆಪಿ ಮುಖಂಡನಿಂದ ಎಸ್ ಟಿ ಯುವತಿಯ ಮೇಲೆ “ಅತ್ಯಾಚಾರ”..!!!! 8 (ಎಂಟು)ತಿಂಗಳ ನಂತರ ಪ್ರಕರಣ ಬಯಲಿಗೆ ಬಂದಿದ್ದು ಹೇಗೆ..?!!

ತೀರ್ಥಹಳ್ಳಿ : ತಾಲೂಕಿನ ಗುಡ್ಡೇಕೇರಿ ಸಮೀಪ ನಾಲೂರ‌ ವಾಸಿ ಮುರುಳಿಧರ್ ಭಟ್ ತಂದೆ ರಾಮಕೃಷ್ಣ (42 ವರ್ಷ) ಎನ್ನುವ ಬಿಜೆಪಿಯ ಮುಖಂಡನೋರ್ವ ಸುಮಾರು 8 ತಿಂಗಳ ಹಿಂದೆ ಹಸಲರು ಜನಾಂಗಕ್ಕೆ ಸೇರಿದ ಎಸ್, ಟಿ ಸಮುದಾಯದ 20 ವರ್ಷದ ಯುವತಿಯನ್ನು ನಂಬಿಸಿ ಮೋಸ ಮಾಡಿ ಅತ್ಯಾಚಾರ ಮಾಡಿ ಆಕೆ ಗರ್ಭವತಿಯಾಗಲು ಕಾರಣನಾಗಿದ್ದಾನೆ.

ಏನಿದು ಪ್ರಕರಣ :

ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೇರಿ ಸಮೀಪ ನಾಲೂರು ಎಂಬ ಊರಿನಲ್ಲಿ ಸುಮಾರು 42 ವರ್ಷದ ಮುರಳಿಧರ್ ಭಟ್ ತಂದೆ ರಾಮಕೃಷ್ಣ ಎನ್ನುವ ವ್ಯಕ್ತಿ ತನ್ನ ಮನೆಯ ಸಮೀಪ ಇರುವ ಎಸ್ ಟಿ ಸಮುದಾಯಕ್ಕೆ ಸೇರಿದ 20 ವರ್ಷದ ಯುವತಿಯನ್ನು ಎಂಟು ತಿಂಗಳ ಹಿಂದೆ ಅತ್ಯಾಚಾರ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತಾಯಿಗೆ ಅನುಮಾನ ಬಂದು ಚಿಕಿತ್ಸೆಗೆ ಕರೆದುಕೊಂಡು ಹೋದಾಗ ಗರ್ಭವತಿ ಆಗಿರುವುದು ದೃಢಪಟ್ಟಿತ್ತು :

ಮಗಳ ಚಲನವಲನಗಳು, ಅವಳ ದೇಹದಲ್ಲಿ ಆಗುತ್ತಿದ್ದ ಏರುಪೇರುಗಳನ್ನು ಗಮನಿಸಿದ ತಾಯಿ ಉಜ್ವಲ ಕೇಂದ್ರದಲ್ಲಿ ಸೇರಿಸಿ ಪರೀಕ್ಷೆ ಮಾಡಿಸಿದಾಗ ಆಕೆ ಗರ್ಭವತಿ ಆಗಿರುವುದು ದೃಢಪಟ್ಟಿದ್ದು. ನಂತರ ಆಕೆಗೆ ಕೌನ್ಸಿಲಿಂಗ್ ಮಾಡಿದಾಗ ಆಕೆ ಗರ್ಭವತಿ ಆಗಿರುವ ಹಿನ್ನೆಲೆಯನ್ನು ಬಾಯಿಬಿಟ್ಟಳು. ಈ ಗರ್ಭಕ್ಕೆ ಕಾರಣನಾದವನು ಮುರಳಿದರ್ ಭಟ್ ಎನ್ನುವ ಸಂಗತಿ ಆಗ ಬಯಲಿಗೆ ಬಂತು.

ಸ್ಥಳೀಯ ಆಗುಂಬೆ ಠಾಣೆಗೆ ದೂರು ನೀಡಿದ ನೊಂದ ಯುವತಿ ಹಾಗೂ ಪೋಷಕರು :

ಅತ್ಯಾಚಾರ ಮಾಡಿದ ಆರೋಪಿ ಮುರಳಿಧರ್ ಭಟ್ ವಿರುದ್ಧ ಸ್ಥಳೀಯ ಠಾಣೆ ಆಗುಂಬೆಯಲ್ಲಿ ದೂರು ನೀಡಿದ ನೊಂದ ಯುವತಿ ಹಾಗೂ ಆಕೆಯ ಪೋಷಕರು.

ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿ ಆರೋಪಿ ಮೇಲೆ ಕೇಸು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಆಗುಂಬೆ ಠಾಣೆಯ ಪೊಲೀಸರು :

ಯುವತಿ ಹಾಗೂ ಆಕೆಯ ಪೋಷಕರು ನೀಡಿದ ದೂರಿನ ಮೇಲೆ ಆರೋಪಿ ಮುರುಳಿಧರ್ ಭಟ್ ಮೇಲೆ ರೇಪ್ ಹಾಗೂ ಅಟ್ರಾಸಿಟಿ ಕೇಸ್ ಗಳನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ...

ರಘುರಾಜ್ ಹೆಚ್.ಕೆ…9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..!