Home ರಾಜ್ಯತೀರ್ಥಹಳ್ಳಿ : ಬಿಜೆಪಿ ಮುಖಂಡನಿಂದ ಎಸ್ ಟಿ ಯುವತಿಯ ಮೇಲೆ “ಅತ್ಯಾಚಾರ”..!!!! 8 (ಎಂಟು)ತಿಂಗಳ ನಂತರ ಪ್ರಕರಣ ಬಯಲಿಗೆ ಬಂದಿದ್ದು ಹೇಗೆ..?!!

ತೀರ್ಥಹಳ್ಳಿ : ಬಿಜೆಪಿ ಮುಖಂಡನಿಂದ ಎಸ್ ಟಿ ಯುವತಿಯ ಮೇಲೆ “ಅತ್ಯಾಚಾರ”..!!!! 8 (ಎಂಟು)ತಿಂಗಳ ನಂತರ ಪ್ರಕರಣ ಬಯಲಿಗೆ ಬಂದಿದ್ದು ಹೇಗೆ..?!!

by EDITOR NEWS WARRIORS
0 comments

ತೀರ್ಥಹಳ್ಳಿ : ತಾಲೂಕಿನ ಗುಡ್ಡೇಕೇರಿ ಸಮೀಪ ನಾಲೂರ‌ ವಾಸಿ ಮುರುಳಿಧರ್ ಭಟ್ ತಂದೆ ರಾಮಕೃಷ್ಣ (42 ವರ್ಷ) ಎನ್ನುವ ಬಿಜೆಪಿಯ ಮುಖಂಡನೋರ್ವ ಸುಮಾರು 8 ತಿಂಗಳ ಹಿಂದೆ ಹಸಲರು ಜನಾಂಗಕ್ಕೆ ಸೇರಿದ ಎಸ್, ಟಿ ಸಮುದಾಯದ 20 ವರ್ಷದ ಯುವತಿಯನ್ನು ನಂಬಿಸಿ ಮೋಸ ಮಾಡಿ ಅತ್ಯಾಚಾರ ಮಾಡಿ ಆಕೆ ಗರ್ಭವತಿಯಾಗಲು ಕಾರಣನಾಗಿದ್ದಾನೆ.

ಏನಿದು ಪ್ರಕರಣ :

ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೇರಿ ಸಮೀಪ ನಾಲೂರು ಎಂಬ ಊರಿನಲ್ಲಿ ಸುಮಾರು 42 ವರ್ಷದ ಮುರಳಿಧರ್ ಭಟ್ ತಂದೆ ರಾಮಕೃಷ್ಣ ಎನ್ನುವ ವ್ಯಕ್ತಿ ತನ್ನ ಮನೆಯ ಸಮೀಪ ಇರುವ ಎಸ್ ಟಿ ಸಮುದಾಯಕ್ಕೆ ಸೇರಿದ 20 ವರ್ಷದ ಯುವತಿಯನ್ನು ಎಂಟು ತಿಂಗಳ ಹಿಂದೆ ಅತ್ಯಾಚಾರ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತಾಯಿಗೆ ಅನುಮಾನ ಬಂದು ಚಿಕಿತ್ಸೆಗೆ ಕರೆದುಕೊಂಡು ಹೋದಾಗ ಗರ್ಭವತಿ ಆಗಿರುವುದು ದೃಢಪಟ್ಟಿತ್ತು :

ಮಗಳ ಚಲನವಲನಗಳು, ಅವಳ ದೇಹದಲ್ಲಿ ಆಗುತ್ತಿದ್ದ ಏರುಪೇರುಗಳನ್ನು ಗಮನಿಸಿದ ತಾಯಿ ಉಜ್ವಲ ಕೇಂದ್ರದಲ್ಲಿ ಸೇರಿಸಿ ಪರೀಕ್ಷೆ ಮಾಡಿಸಿದಾಗ ಆಕೆ ಗರ್ಭವತಿ ಆಗಿರುವುದು ದೃಢಪಟ್ಟಿದ್ದು. ನಂತರ ಆಕೆಗೆ ಕೌನ್ಸಿಲಿಂಗ್ ಮಾಡಿದಾಗ ಆಕೆ ಗರ್ಭವತಿ ಆಗಿರುವ ಹಿನ್ನೆಲೆಯನ್ನು ಬಾಯಿಬಿಟ್ಟಳು. ಈ ಗರ್ಭಕ್ಕೆ ಕಾರಣನಾದವನು ಮುರಳಿದರ್ ಭಟ್ ಎನ್ನುವ ಸಂಗತಿ ಆಗ ಬಯಲಿಗೆ ಬಂತು.

ಸ್ಥಳೀಯ ಆಗುಂಬೆ ಠಾಣೆಗೆ ದೂರು ನೀಡಿದ ನೊಂದ ಯುವತಿ ಹಾಗೂ ಪೋಷಕರು :

ಅತ್ಯಾಚಾರ ಮಾಡಿದ ಆರೋಪಿ ಮುರಳಿಧರ್ ಭಟ್ ವಿರುದ್ಧ ಸ್ಥಳೀಯ ಠಾಣೆ ಆಗುಂಬೆಯಲ್ಲಿ ದೂರು ನೀಡಿದ ನೊಂದ ಯುವತಿ ಹಾಗೂ ಆಕೆಯ ಪೋಷಕರು.

ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿ ಆರೋಪಿ ಮೇಲೆ ಕೇಸು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಆಗುಂಬೆ ಠಾಣೆಯ ಪೊಲೀಸರು :

ಯುವತಿ ಹಾಗೂ ಆಕೆಯ ಪೋಷಕರು ನೀಡಿದ ದೂರಿನ ಮೇಲೆ ಆರೋಪಿ ಮುರುಳಿಧರ್ ಭಟ್ ಮೇಲೆ ರೇಪ್ ಹಾಗೂ ಅಟ್ರಾಸಿಟಿ ಕೇಸ್ ಗಳನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ...

ರಘುರಾಜ್ ಹೆಚ್.ಕೆ…9449553305…

Related Articles

Leave a Comment

Latest news
Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..!