Saturday, June 21, 2025
Google search engine
Homeರಾಜ್ಯತೀರ್ಥಹಳ್ಳಿ : ಬಿಜೆಪಿ ಮುಖಂಡನಿಂದ ಎಸ್ ಟಿ ಯುವತಿಯ ಮೇಲೆ "ಅತ್ಯಾಚಾರ"..!!!! 8 (ಎಂಟು)ತಿಂಗಳ ನಂತರ...

ತೀರ್ಥಹಳ್ಳಿ : ಬಿಜೆಪಿ ಮುಖಂಡನಿಂದ ಎಸ್ ಟಿ ಯುವತಿಯ ಮೇಲೆ “ಅತ್ಯಾಚಾರ”..!!!! 8 (ಎಂಟು)ತಿಂಗಳ ನಂತರ ಪ್ರಕರಣ ಬಯಲಿಗೆ ಬಂದಿದ್ದು ಹೇಗೆ..?!!

ತೀರ್ಥಹಳ್ಳಿ : ತಾಲೂಕಿನ ಗುಡ್ಡೇಕೇರಿ ಸಮೀಪ ನಾಲೂರ‌ ವಾಸಿ ಮುರುಳಿಧರ್ ಭಟ್ ತಂದೆ ರಾಮಕೃಷ್ಣ (42 ವರ್ಷ) ಎನ್ನುವ ಬಿಜೆಪಿಯ ಮುಖಂಡನೋರ್ವ ಸುಮಾರು 8 ತಿಂಗಳ ಹಿಂದೆ ಹಸಲರು ಜನಾಂಗಕ್ಕೆ ಸೇರಿದ ಎಸ್, ಟಿ ಸಮುದಾಯದ 20 ವರ್ಷದ ಯುವತಿಯನ್ನು ನಂಬಿಸಿ ಮೋಸ ಮಾಡಿ ಅತ್ಯಾಚಾರ ಮಾಡಿ ಆಕೆ ಗರ್ಭವತಿಯಾಗಲು ಕಾರಣನಾಗಿದ್ದಾನೆ.

ಏನಿದು ಪ್ರಕರಣ :

ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೇರಿ ಸಮೀಪ ನಾಲೂರು ಎಂಬ ಊರಿನಲ್ಲಿ ಸುಮಾರು 42 ವರ್ಷದ ಮುರಳಿಧರ್ ಭಟ್ ತಂದೆ ರಾಮಕೃಷ್ಣ ಎನ್ನುವ ವ್ಯಕ್ತಿ ತನ್ನ ಮನೆಯ ಸಮೀಪ ಇರುವ ಎಸ್ ಟಿ ಸಮುದಾಯಕ್ಕೆ ಸೇರಿದ 20 ವರ್ಷದ ಯುವತಿಯನ್ನು ಎಂಟು ತಿಂಗಳ ಹಿಂದೆ ಅತ್ಯಾಚಾರ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತಾಯಿಗೆ ಅನುಮಾನ ಬಂದು ಚಿಕಿತ್ಸೆಗೆ ಕರೆದುಕೊಂಡು ಹೋದಾಗ ಗರ್ಭವತಿ ಆಗಿರುವುದು ದೃಢಪಟ್ಟಿತ್ತು :

ಮಗಳ ಚಲನವಲನಗಳು, ಅವಳ ದೇಹದಲ್ಲಿ ಆಗುತ್ತಿದ್ದ ಏರುಪೇರುಗಳನ್ನು ಗಮನಿಸಿದ ತಾಯಿ ಉಜ್ವಲ ಕೇಂದ್ರದಲ್ಲಿ ಸೇರಿಸಿ ಪರೀಕ್ಷೆ ಮಾಡಿಸಿದಾಗ ಆಕೆ ಗರ್ಭವತಿ ಆಗಿರುವುದು ದೃಢಪಟ್ಟಿದ್ದು. ನಂತರ ಆಕೆಗೆ ಕೌನ್ಸಿಲಿಂಗ್ ಮಾಡಿದಾಗ ಆಕೆ ಗರ್ಭವತಿ ಆಗಿರುವ ಹಿನ್ನೆಲೆಯನ್ನು ಬಾಯಿಬಿಟ್ಟಳು. ಈ ಗರ್ಭಕ್ಕೆ ಕಾರಣನಾದವನು ಮುರಳಿದರ್ ಭಟ್ ಎನ್ನುವ ಸಂಗತಿ ಆಗ ಬಯಲಿಗೆ ಬಂತು.

ಸ್ಥಳೀಯ ಆಗುಂಬೆ ಠಾಣೆಗೆ ದೂರು ನೀಡಿದ ನೊಂದ ಯುವತಿ ಹಾಗೂ ಪೋಷಕರು :

ಅತ್ಯಾಚಾರ ಮಾಡಿದ ಆರೋಪಿ ಮುರಳಿಧರ್ ಭಟ್ ವಿರುದ್ಧ ಸ್ಥಳೀಯ ಠಾಣೆ ಆಗುಂಬೆಯಲ್ಲಿ ದೂರು ನೀಡಿದ ನೊಂದ ಯುವತಿ ಹಾಗೂ ಆಕೆಯ ಪೋಷಕರು.

ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿ ಆರೋಪಿ ಮೇಲೆ ಕೇಸು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಆಗುಂಬೆ ಠಾಣೆಯ ಪೊಲೀಸರು :

ಯುವತಿ ಹಾಗೂ ಆಕೆಯ ಪೋಷಕರು ನೀಡಿದ ದೂರಿನ ಮೇಲೆ ಆರೋಪಿ ಮುರುಳಿಧರ್ ಭಟ್ ಮೇಲೆ ರೇಪ್ ಹಾಗೂ ಅಟ್ರಾಸಿಟಿ ಕೇಸ್ ಗಳನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ...

ರಘುರಾಜ್ ಹೆಚ್.ಕೆ…9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!