
ಶಿವಮೊಗ್ಗ: ನಗರದ ನೆಹರು ಕ್ರೀಡಾಂಗಣದಲ್ಲಿ ಇಂದು ಸಂಜೆ 7:30ಕ್ಕೆ ಸರಿಯಾಗಿ ಫೀನಿಕ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯನ್ನು ಖ್ಯಾತ ಅಂತರಾಷ್ಟ್ರೀಯ ಕ್ರೀಡಾಪಟುಗಳು, ಭಾರತ ಹಾಕಿ ತಂಡದ ಮಾಜಿ ನಾಯಕರು, ಅರ್ಜುನ್ ಪ್ರಶಸ್ತಿ ಪುರಸ್ಕೃತರು ಆದ ವಿ ಆರ್ ರಘುನಾಥ್, ನ್ಯಾಷನಲ್ ರ್ಯಾಲಿ ಚಾಂಪಿಯನ್ ರಾಜೇಂದ್ರ, ಮಹಾನಗರ ಪಾಲಿಕೆಯ ಸದಸ್ಯರಾದ ರಮೇಶ ಹೆಗಡೆ, ಫೀನಿಕ್ಸ್ ಕ್ಲಬ್ ಅಸೋಸಿಯೇಷನ್ ವಿಜಯಕುಮಾರ್ ಉಪಸ್ಥಿತರಿರಲಿದ್ದು .
ಈ ಅದ್ದೂರಿ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಒಟ್ಟು 31 ತಂಡಗಳು ಭಾಗವಹಿಸಲಿದ್ದು ಗೋವಾ ಕೇರಳದಿಂದ ಅಂತರಾಷ್ಟ್ರೀಯ ಕ್ರೀಡಾಪಟುಗಳು ಇರುವ5 ತಂಡಗಳು, ಹೊರ ಜಿಲ್ಲೆಗಳಿಂದ 15 ತಂಡಗಳು, ಸ್ಥಳೀಯವಾಗಿ 11 ತಂಡಗಳು ಭಾಗವಹಿಸಲಿದ್ದು. ಸುಮಾರು 450 ಜನ ಕ್ರೀಡಾಪಟುಗಳು ಭಾಗವಹಿಸಲಿರುವ ಬೃಹತ್ ಕ್ರೀಡಾಕೂಟವಾಗಿದೆ.
ಭಾಗವಹಿಸುವ ಪ್ರತಿ ಕ್ರೀಡಾಪಟುಗಳಿಗೂ ಊಟ ಮತ್ತು ವಸತಿಯ ವ್ಯವಸ್ಥೆ ಕಲ್ಪಿಸಲಾಗಿದ್ದು. ಫುಟ್ಬಾಲ್ ಕ್ರೀಡಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸಬೇಕಾಗಿ ಫೀನಿಕ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ವಿಜಯಕುಮಾರ್ ಅವರು ಆತ್ಮೀಯ ಆಮಂತ್ರಣ ನೀಡಿದ್ದಾರೆ…

ರಘುರಾಜ್ ಹೆಚ್.ಕೆ…9449553305…